ಮೊದಲ ಬಾರಿಗೆ ಮರಿ ಮೊಮ್ಮಗನನ್ನು ನೋಡಲು ಹೋದಾಗ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಒಂದು ಸಂತೋಷದ ಸುದ್ದಿ ಸ್ಯಾಂಡಲ್ವುಡ್ನಲ್ಲಿ ನಡೆದಿರುವುದು ನಿಮಗೆಲ್ಲಾ ಗೊತ್ತೇ ಇದೆ ಸ್ನೇಹಿತರೆ. ಹೌದು ಸ್ನೇಹಿತರೆ ಮೇಘನಾರಾಜ್ ರವರ ಮಗ ಜೂನಿಯರ್ ಚಿರು ಸರ್ಜಾ ರವರಿಗೆ ರಾಯನ್ ರಾಜ್ ಸರ್ಜಾ ಹೆಸರನ್ನು ಇಡಲಾಗಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಸಂತೋಷದ ಸುದ್ದಿ ಕೂಡ ಬಂದಿದೆ. ಹೌದು ಸ್ನೇಹಿತರೆ ಸ್ಯಾಂಡಲ್ವುಡ್ನ ಯುವರಾಜ ಎಂದೇ ಖ್ಯಾತರಾಗಿರುವ ನಿಖಿಲ್ ಕುಮಾರ್ ರವರು ಇತ್ತೀಚಿಗಷ್ಟೇ ಗಂಡು ಮಗುವಿಗೆ ತಂದೆಯಾಗಿದ್ದಾರೆ ಎಂಬುದು ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಸಂತೋಷದ ಮನೆಮಾಡಿದೆ.
ಹೌದು ಸ್ನೇಹಿತರೆ ನಿಖಿಲ್ ಕುಮಾರ್ ಅವರ ಪತ್ನಿ ರೇವತಿ ಅವರು ಇತ್ತೀಚೆಗೆ ತಾವು ಗರ್ಭಿಣಿ ಆಗಿರುವುದರ ಕುರಿತಂತೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು. ನಂತರ ನಿಖಿಲ್ ಕುಮಾರ್ ರವರು ಹೆಂಡತಿಯ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಆಚರಿಸಿದರು. ಒಬ್ಬ ಗಂಡನಾಗಿ ಮಾಡುವಂತಹ ಎಲ್ಲಾ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ಸಂತೋಷದಿಂದ ಮುಂದೆ ನಿಂತು ಮಾಡಿದ್ದಾರೆ. ಇತ್ತೀಚಿಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡುಮಗುವಿಗೆ ಜನ್ಮ ನೀಡುವುದರ ಮೂಲಕ ದೊಡ್ಡಗೌಡರ ಕುಟುಂಬಕ್ಕೆ ಸಂತೋಷದ ಹಬ್ಬವನ್ನು ತರಿಸಿದ್ದಾರೆ. ಹೌದು ಸ್ನೇಹಿತರೆ ಇನ್ನು ಆಸ್ಪತ್ರೆಗೆ ನಿಖಿಲ್ ಕುಮಾರ್ ಅವರ ತಂದೆಯಾಗಿರುವ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಅವರು ಕೂಡ ಧಾವಿಸಿ ಬಂದಿದ್ದಾರೆ.
ಇನ್ನು ವಯಸ್ಸಾಗಿದ್ದರೂ ಕೂಡ ಮರಿ ಮೊಮ್ಮಗನನ್ನು ನೋಡುವ ತವಕದಲ್ಲಿ ದೇವೇಗೌಡರು ಕೂಡ ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ಆಗಮಿಸಿದ್ದಾರೆ. ಇನ್ನು ಮರಿಮೊಮ್ಮಗ ನನ್ನು ನೋಡಿ ದೇವೇಗೌಡರು ಹಾಗೂ ಅವರ ಪತ್ನಿ ಇಬ್ಬರೂ ಕೂಡ ಭಾವುಕರಾಗಿ ಸಂತೋಷದ ಕಣ್ಣೀರನ್ನು ಕೂಡ ಸುರಿಸಿದ್ದಾರೆ. ಇನ್ನು ದೇವೇಗೌಡರು ತಮ್ಮ ಮರಿ ಮೊಮ್ಮಗನಿಗೆ 6 ಲಕ್ಷ ಬೆಲೆಬಾಳುವ ಚಿನ್ನದ ಸರವನ್ನು ಕೂಡ ತಂದು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ದೇವೇಗೌಡ ರವರ ಪತ್ನಿ ಚನ್ನಮ್ಮ ಅವರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೈಸೂರು ಸಿಲ್ಕ್ ಸೀರೆಯನ್ನು ರೇವತಿ ಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಒಟ್ಟಾರೆಯಾಗಿ ನಿಖಿಲ್ ಕುಮಾರ್ ಅವರ ಪುತ್ರನ ಆಗಮನದಿಂದಾಗಿ ಇಡೀ ಕುಟುಂಬದಲ್ಲಿ ಸಂತೋಷದ ದಿನಗಳು ಎದ್ದು ಕಾಣುತ್ತಿದೆ.