ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನೆಮಾದ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಸಲ್ಮಾನ್ ಖಾನ್, ಹೇಳಿದ್ದೇನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಕನ್ನಡದಲ್ಲಿಯೂ ಇತರ ಭಾಷೆಗಳಂತೆ ಅದ್ದೂರಿಯಾಗಿ ಕಮಶ್ರಿಯಲ್ ಚಿತ್ರಗಳ ನಿರ್ಮಣ ಮಾಡಲಾಗುತ್ತಿದ್ದು ಅತೀ ಹೆಚ್ಚಿನ ಬಂಡವಾಳವನ್ನು ಈ ಚಿತ್ರಗಳಿಗೆ ಹಾಕಲಾಗುತ್ತಿದೆ. ಅಲ್ಲದೇ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಇಂಥ ಚಿತ್ರಗಳು ಬಿಡುಗಡೆ ಕಾಣುತ್ತಿವೆ. ಬೇರೆ ಭಾಷೆಯ ಚಿತ್ರಗಳನ್ನೇ ಹೆಚ್ಚಾಗಿ ರಿಮೇಕ್ ಮಾಡುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸ ಅಲೆ ಆರಂಭವಾಗಿದೆ. ಕನ್ನಡ ಚಿತ್ರಗಳು ಇತರ ಭಾಷೆಗಳಲಿಯೂ ಕೂಡ ತುಂಬಾನೇ ನಿರೀಕ್ಷೆಯನ್ನು ಉಂಟು ಮಾಡುತ್ತಿದೆ. ಇದಕ್ಕೆ ಇನ್ನು ಬಿಡುಗಡೆ ಕಾಣಲಿರುವ ವಿಕ್ರಾಂತ್ ರೋಣ ಚಿತ್ರ ಕೂಡ ಹೊರತಲ್ಲ.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಈಗಾಗಲೇ ದೇಶದಾದ್ಯಂತ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಎಲ್ಲಾ ಚಿತ್ರಗಳೂ ಬಹಳ ಸೆನ್ಸೇಶನ್ ಕ್ರಿಯೇಟ್ ಮಾಡುವಂಥ ಸಿನಿಮಾಗಳು. ಹಾಗಾಗಿ ಅವರು ನಟಿಸುವ ಚಿತ್ರಗಳಿಗೆ ತುಚು ಬೇಡಿಕೆ ಜಾಸ್ತಿಯೆ. ಅದರಲ್ಲೂ ಇತ್ತೀಚಿಗೆ ಬಾಲಿವುಡ್ ನಟರು ಚಂದನವನದತ್ತ ಮುಖ ಮಾಡಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್, ಸಂಜಯ್ ದತ್, ಸುನೀಲ್ ಶೆಟ್ಟಿ, ವಿವೇಕ್ ಒಬೆರಾಯ್ ಮೊದಲಾದ ಸೂಪರ್ ಸ್ಟಾರ್ ಗಳು ಕನ್ನಡ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗವನ್ನೂ ಕೂಡ ಮೆಚ್ಚಿ ಹೊಗಳುತ್ತಿದ್ದಾರೆ.

ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಕಷ್ಟು ವೀಕ್ಷಣೆಯನ್ನು ಕಂಡಿದೆ. ಈ ಟ್ರೈಲರ್ ನ್ನು ನೋಡಿ ಬಾಲಿವುಡ್ ನಾಯಕ ಸಲ್ಮಾನ್ ಖಾನ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಟ್ರೈಲರ್ ಗೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್ ಸುದೀಪ್ ಅವರಿಗೆ ಶುಭಾಶಯ ತಿಳಿಸಿದ್ದಾರ್‍ಎ ಜೊತೆಗೆ ಟ್ರೈಲರ್ ತುಂಬಾ ಚೆನ್ನಾಗಿದೆ ಎಂದು ಕೂಡ ಹೊಗಳಿದ್ದಾರೆ.

ಕಿಚ್ಚ ಸುದೀಪ್ ಬರ್ತ್‍ಡೇ ದಿನದವೇ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಡೆಡ್ ಮ್ಯಾನ್ಸ್ ಆ್ಯಂಥಮ್ ಹೆಸರಿನ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ್ದರು. ಹಾಗಾಗಿ ಇಬ್ಬರಿಗೂ ದೇಶದಾದ್ಯಂತ ಅಭಿಮಾನಿಗಳು ಹೆಚ್ಚಿದ್ದಾರೆ.

Get real time updates directly on you device, subscribe now.