ಮಂಜು ಹಾಗೂ ದಿವ್ಯ ಸುರೇಶ್ ಇಬ್ಬರನ್ನು ಮನೆಗೆ ಕರೆಸಿದ ರಚಿತಾರಾಮ್ ಮಾಡಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಮಜಾಭಾರತ ಕಾರ್ಯಕ್ರಮದ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದ ನಂತರ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿಜೇತರಾಗಿರುವ ಮಂಜು ಪಾವಗಡ ರವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಬಡ ಕುಟುಂಬದಿಂದ ಬಂದಿರುವ ಮಂಜು ಪಾವಗಡ ರವರು ಈಗ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಯೋಗ್ಯ ಅಭ್ಯರ್ಥಿಯಾಗಿ ಎಲ್ಲಾ ಸ್ಪರ್ಧೆಗಳಲ್ಲಿ ಕೂಡ ಗಮನಾರ್ಹ ಪ್ರದರ್ಶನವನ್ನು ನೀಡಿ ಪ್ರೇಕ್ಷಕರ ಮನಗೆದ್ದ 45 ಲಕ್ಷಕ್ಕೂ ಅಧಿಕ ಮತಗಳನ್ನು ಗೆದ್ದು ಮೊದಲ ಸ್ಥಾನ ಪಡೆದು 53 ಲಕ್ಷ ಬಹುಮಾನವನ್ನು ಕೂಡ ಪಡೆದುಕೊಂಡಿದ್ದಾರೆ.
ಇನ್ನು ಮಂಜು ಪಾವಗಡ ರವರು ಗೆದ್ದ ನಂತರ ತಮ್ಮ ಹುಟ್ಟೂರಿಗೆ ಕೂಡ ಹೋಗಿ ಬಂದಿದ್ದಾರೆ. ಮಾತ್ರವಲ್ಲದೇ ಶಿವಣ್ಣರವರ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಮಂಜು ಪಾವಗಡ ರವರು ದಿವ್ಯ ಸುರೇಶ ರವರೊಂದಿಗೆ ಕನ್ನಡದ ಖ್ಯಾತ ನಟಿಯೊಬ್ಬರನ್ನು ಕೂಡ ಭೇಟಿ ಮಾಡಿದ್ದರಂತೆ. ಹೌದು ಸ್ನೇಹಿತರೆ ಮಂಜು ಪಾವಗಡ ರವರು ಬಿಗ್ ಬಾಸ್ ನಲ್ಲಿ ಇದ್ದಷ್ಟು ದಿನ ಅವರಿಗೆ ಬಟ್ಟೆಯನ್ನು ಕೊಡಿಸುತ್ತಿದ್ದದ್ದು ಕನ್ನಡದ ಖ್ಯಾತ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು.
ಇನ್ನು ಬಿಗ್ ಬಾಸ್ ಫಿನಾಲೆಗೆ ಮಂಜು ಪಾವಗಡ ಅವರು ಧರಿಸಿದ್ದ ಬ್ಲಾಕ್ ಸೂಟ್ ಕೂಡ ರಚಿತರಾಮ್ ಅವರೇ ಆಯ್ಕೆ ಮಾಡಿದ್ದು. ಇನ್ನು ಇಬ್ಬರನ್ನು ಮನೆಗೆ ಕರೆಸಿಕೊಂಡು ಅತಿಥಿಸತ್ಕಾರ ಮಾಡಿ ಆಧರಿಸಿ ಕಳಿಸಿಕೊಟ್ಟಿದ್ದಾರೆ ಎಂದು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ರಚಿತರಾಮ್ ನಟನೆಯ ಚಿತ್ರಗಳಲ್ಲಿ ಮಂಜು ಪಾವಗಡ ರವರಿಗೆ ಅವಕಾಶಗಳು ಸಿಕ್ಕರೆ ಕೂಡ ಆಶ್ಚರ್ಯಪಡಬೇಕಾಗಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯ ಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.