ಬುಲೆಟ್ ಪ್ರಕಾಶ್ ಅವರ ಕನಸನ್ನು ಪೂರ್ಣಗೊಳಿಸಲು ಸಿದ್ದವಾದ ಮಗ, ಚಿತ್ರರಂಗಕ್ಕೆ ಎಂಟ್ರಿ, ಹೇಗಿದ್ದಾರೆ ಗೊತ್ತಾ ಹೀರೋ.

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಮಾಮರಿ ಬಂದಮೇಲೆ ನಾವು ಹಲವಾರು ಜನರನ್ನು ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಂಗದಲ್ಲಂತೂ ಅದೆಷ್ಟು ನಟ-ನಟಿಯರು ಹಾಗೂ ನಿರ್ಮಾಪಕ ನಿರ್ದೇಶಕರು ಕೂಡ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರಲ್ಲಿ ಒಬ್ಬ ನಟನ ಅಗಲಿಕೆಯಿಂದ ನಮಗೆ ಬಹಳ ನೋವನ್ನುಂಟುಮಾಡಿತು ಏಕೆಂದರೆ ಅವರ ಕೆಲ ತಿಂಗಳ ಹಿಂದಿನ ಸಂದರ್ಶನವಷ್ಟೇ ಎಲ್ಲರ ಕಣ್ಣಲ್ಲಿ ನೀರನ್ನು ತರಿಸಿತ್ತು ಏಕೆಂದರೆ ಚಿತ್ರರಂಗ ಅವರನ್ನು ದೂರ ಮಾಡುತ್ತಿದೆ ಎಂಬ ದೂರನ್ನು ಅವರು ಮಾಡಿದ್ದರು.

ಇದರಿಂದಾಗಿ ಅವರ ಮೇಲೆ ಎಲ್ಲರಿಗೂ ಒಂದು ಕನಿಕರ ಭಾವನೆ ಇತ್ತು. ಆ ಪರಿಸ್ಥಿತಿ ನವರು ಜಯಿಸಿದ್ದಾರೆ ಎಂಬ ಹೊತ್ತಲ್ಲೇ ಅವರು ಈ ಜಗತ್ತನ್ನೇ ಬಿಟ್ಟುಹೋಗಿದ್ದು ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು. ಹೌದು ಸ್ನೇಹಿತರೆ ಆನಂದ ಇನ್ಯಾರೂ ಅಲ್ಲ ನಮ್ಮ ನೆಚ್ಚಿನ ಹಾಸ್ಯಕಲಾವಿದ ಬುಲೆಟ್ ಪ್ರಕಾಶ್ ಅವರು. ಹೌದು ಸ್ನೇಹಿತರೆ ಕನ್ನಡ ಚಿತ್ರಂಗದಲ್ಲಿ ಒಂದುಕಾಲದಲ್ಲಿ ಟಾಪ್ ಸ್ಟಾರ್ ಹಾಸ್ಯ ಕಲಾವಿದನಾಗಿ ಸಂಭಾವನೆ ಪಡೆಯುತ್ತಿದ್ದ ಬುಲೆಟ್ ಪ್ರಕಾಶ್ ಅವರು,

ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಹದಗೆಟ್ಟು ಆರೋಗ್ಯದಲ್ಲಿ ಏರುಪೇರಾಗಿ ಚಿತ್ರರಂಗದಿಂದ ದೂರ ಉಳಿದಿದ್ದರು. ಒಮ್ಮೆಯಂತೂ ಬುಲೆಟ್ ಪ್ರಕಾಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ತಾಗಿತ್ತು ಹರಿದಾಡಿತ್ತು. ಆದರೆ ಅದ್ಯಾವುದು ನಡೆಯಲಿಲ್ಲ. ಪ್ರತಿ ಸಿನಿಮಾಗೂ ಲಕ್ಷಲಕ್ಷ ಸಂಭಾವನೆಯನ್ನು ಪಡೆದಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ನಂತರ ತಮ್ಮ ಆಸ್ಪತ್ರೆ ಬಿಲ್ ಕಟ್ಟಲು ಕೂಡ ದುಡ್ಡಿಲ್ಲದಂತೆ ಆಗಿಬಿಟ್ಟರು.

ನಟ ತಾವಿದ್ದ ಅಷ್ಟು ದಿನ ಎಲ್ಲರನ್ನು ನಗಿಸಿ ಕೊಂಡೆ ಬಂದವರು. ಕನ್ನಡ ಚಿತ್ರರಂಗದ ಅಜಾತಶತ್ರು ಎಂಬ ಸ್ಥಾನದಲ್ಲಿದ್ದ ನಟನೆಗೆ ಅದೆಷ್ಟೋ ಜನರು ಚಿತ್ರರಂಗದಿಂದ ದೂರ ಹೋಗಲು ಹುನ್ನಾರ ಮಾಡಿದ್ದರೆಂಬುದು ಅವರೇ ಹೇಳಿದ್ದಾರೆ ತಮ್ಮ ಸಂದರ್ಶನದಲ್ಲಿ. ಬುಲೆಟ್ ಪ್ರಕಾಶ್ ಅವರಿಗೆ ಕೊನೆಯ ದಿನಗಳಲ್ಲಿ ಇದ್ದ ಆಸೆ ಏನೆಂದರೆ ತಮ್ಮ ಮಗಳಿಗೆ ಒಂದು ಒಳ್ಳೆಯ ಮನೆ ನೋಡಿ ಮದುವೆ ಮಾಡುವುದು ಹಾಗೂ ತನ್ನ ಮಗನನ್ನು ಚಿತ್ರರಂಗದಲ್ಲಿ ಬೆಳೆಯುವಂತೆ ನೋಡಿಕೊಳ್ಳುವುದು. ಆದರೆ ಆಸೆ ಪೂರೈಸು ಮುನ್ನವೇ ಬುಲೆಟ್ ಪ್ರಕಾಶ್ ಅವರು ಪಂಚಭೂತಗಳಲ್ಲಿ ಲೀನರಾದರು.

ಆದರೆ ಬುಲೆಟ್ ಪ್ರಕಾಶ್ ರವರ ಮಗನನ್ನು ನಟನನ್ನಾಗಿ ನೋಡುವ ಆಸೆ ಅವರು ಹೋದಮೇಲೆ ಕೂಡ ಈಗ ಕಾರ್ಯ ಚಾಲ್ತಿಯಲ್ಲಿದೆ. ಹೌದು ಸ್ನೇಹಿತರೆ ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ಬುಲೆಟ್ ಪ್ರಕಾಶ್ ರವರ ಮಗನಾದ ರಕ್ಷಕ್ ಹೀಗೆ ಸ್ಯಾಂಡಲ್ವುಡ್ಗೆ ಕಾಲಿಡುವ ಪ್ರಕ್ರಿಯೆ ನಡೆದಿದೆ. ಹೌದು ಕಾಮಿಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ಶರಣ್ ರವರ ಮುಂದಿನ ಬಹು ನಿರೀಕ್ಷಿತ ಚಿತ್ರ ಗುರು-ಶಿಷ್ಯರು ಚಿತ್ರದಲ್ಲಿ ರಕ್ಷಕ್ ಕೂಡ ಕಾಣಿಸಿಕೊಳ್ಳುತ್ತಿದ್ದು

ತಂದೆಯ ಆಸೆಯನ್ನು ನೆರವೇರಿಸುವ ಹಂತದಲ್ಲಿದ್ದಾರೆ ಮಗ. ಈ ಚಿತ್ರದಲ್ಲಿ ತರುಣ್ ಸುಧೀರ್ ಹಾಗೂ ಶರಣ್ ರವರು ನಿರ್ಮಾಪಕರಾಗಿ ಕಾಣಿಸಿಕೊಂಡಿದ್ದು. ಜಡೆಶ್ ಕೆ ಹಂಪಿ ನಿರ್ದೇಶನ ಈ ಚಿತ್ರಕ್ಕಿದೆ. ಖಂಡಿತವಾಗಿಯೂ ಚಿತ್ರ ಬುಲೆಟ್ ಪ್ರಕಾಶ್ ರವರ ಮಗನಿಗೆ ಒಂದೊಳ್ಳೆ ಜನಮನ್ನಣೆಯನ್ನು ತರಲು ಸುವರ್ಣ ಅವಕಾಶ ಎಂದೇ ಹೇಳಬಹುದು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.