ನೆನಪಿದ್ದಾರಾ ಸೌಂದರ್ಯವತಿ ‘ಕರ್ಪೂರದ ಗೊಂಬೆ’ ನಟಿ ಶ್ವೇತಾ ಇದೀಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತಾ??

78

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ತಮ್ಮ ನಟನೆಯ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದಾರೆ. ಇನ್ನು ಕೆಲವು ನಟಿಯರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಇಂದಿಗೂ ಅವರು ನಟಿಸಿದ ಸಿನಿಮಾಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಅಂತಹ ನಟಿಯರಲ್ಲಿ ಶ್ವೇತಾ ಕೂಡ ಒಬ್ಬರು.

ಹೌದು 1992ರಲ್ಲಿ ಚೈತ್ರದ ಪ್ರೇಮಾಂಜಲಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ ಶ್ವೇತಾ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಇನ್ನು ಇವರು ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ಗುರುತಿಸಿಕೊಂಡಿದ್ದರು. ಮೊದಮೊದಲು ಇವರು ಬಾಲನಟಿಯಾಗಿ ಮಲೆಯಾಳಂ ಹಾಗೂ ತಮಿಳು ಧಾರಾವಾಹಿಗಳ ಮೂಲಕ ಕ್ಷೇತ್ರಕ್ಕೆ ಬಂದವರು. ನಂತರದಲ್ಲಿ ಅವರು ನಾಯಕ ನಟಿಯಾಗಿ ಕನ್ನಡ ಸೇರಿದಂತೆ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

ಹೌದು ನಟಿ ಶ್ವೇತಾ ಅವರು ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಬಂದರು ಕೂಡ ನಂತರದಲ್ಲಿ ನಾಯಕ ನಟಿಯಾಗಿ ಹೆಚ್ಚು ಜನಪ್ರಿಯತೆ ಪಡೆದರು. ಕನ್ನಡ ಚಿತ್ರರಂಗದಲ್ಲಿ ಅವರು ಚೈತ್ರದ ಪ್ರೇಮಾಂಜಲಿ, ಗೆಜ್ಜೆನಾದ, ಮಿನುಗುತಾರೆ, ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ, ಬದುಕು ಜಟಕಾಬಂಡಿ, ನಮ್ಮ ಸಂಸಾರ ಆನಂದ ಸಾಗರ, ಕುಟುಂಬ, ಕೋಟಿಗೊಬ್ಬ ಸೇರಿದಂತೆ ಸಾಕಷ್ಟು ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಹಲವಾರು ಚಿತ್ರಗಳ ಮೂಲಕ ತಮ್ಮ ನಟನೆಯನ್ನು ಪ್ರಸ್ತುತಪಡಿಸುತ್ತ ಕನ್ನಡಿಗರ ಮನೆಮಾತಾದರು.

ಹೌದು ನಟಿ ಶ್ವೇತಾ ಅವರು ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಈ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ನಂತರದಲ್ಲಿ ಶ್ರುತಿ ಅವರ ತಂಗಿಯ ಪಾತ್ರದಲ್ಲಿ ಕರ್ಪೂರದ ಗೊಂಬೆ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ಅವರಿಗೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. ನಂತರ ಅವರು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವರ ನಟನೆ ಕನ್ನಡಿಗರಿಗೆ ತುಂಬಾ ಇಷ್ಟವಾಗಿತ್ತು.

ಇನ್ನು ಇದೀಗ 2002ರ ನಂತರ ಅವರು ಕನ್ನಡ ಚಿತ್ರರಂಗದಿಂದ ದೂರವುಳಿದರು. ಹೌದು ಅಂದಿನ ಸಮಯದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಇವರು 2002ರ ನಂತರ ಅವರಿಗೆ ಅವಕಾಶಗಳು ಕಡಿಮೆ ಯಾದವು. ಇನ್ನು ಅವರು ಕನ್ನಡ ಚಿತ್ರರಂಗದಿಂದ ಅವಕಾಶಗಳು ಬರದೇ ಇದ್ದಾಗ ತಮಿಳು ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಇನ್ನು ಇದೀಗ ನಟಿ ಶ್ವೇತಾ ಅವರು ನೋಡಲು ತುಂಬಾ ಬದಲಾಗಿದ್ದಾರೆ. ಹೀಗೆ ದಿನಗಳು ಕಳೆದಂತೆ ಅವರು ಚಿತ್ರರಂಗ ಹಾಗೂ ಕಿರುತೆರೆಯಿಂದ ದೂರವಾಗುತ್ತ ಹೋದರು. ಇದೀಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ. ಕೆಲವು ಮೂಲಗಳ ಪ್ರಕಾರ ಇವರು ಕುಟುಂಬದ ಜೊತೆ ಸಮಯ ಕಳೆಯಲು ನಿರ್ಧಾರ ಮಾಡಿದ್ದಾರೆ ಅದೇ ಕಾರಣಕ್ಕೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕರೂ ಕೂಡ ಒಪ್ಪಿಕೊಂಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

Get real time updates directly on you device, subscribe now.