ರಾಮು ತೀರಿಕೊಂಡ 1 ತಿಂಗಳ ನಂತರ ಮಾಲಾಶ್ರೀ ಅವರ ಮನೆಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಬಂದಮೇಲಂತೂ ಇಡೀ ವಿಶ್ವದಲ್ಲೇ ಹಾಹಾಕಾರ ಎದ್ದಿದೆ. ಎಲ್ಲಿ ನೋಡಿದರೂ ದುಃಖದ ಮಡುಗಟ್ಟಿದ ಪರಿಸ್ಥಿತಿಗಳೇ ಕಾಣುತ್ತದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಅದರಲ್ಲೂ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗಣ್ಯರು ನಮ್ಮನ್ನು ಅಗಲಿದ್ದಾರೆ. ಈ ಮಹಾಮಾಯಿ ಯಿಂದಾಗಿ ಅದೆಷ್ಟು ನಟ-ನಟಿಯರು ಹಾಗೂ ನಿರ್ಮಾಪಕ ನಿರ್ದೇಶಕರು ಕೂಡ ಇಹಲೋಕ ತ್ಯಜಿಸಿದ್ದಾರೆ. ಇಂದಿನ ವಿಷದಲ್ಲಿ ನಾವು ನಿರ್ಮಾಪಕ ರಾಮು ರವರು ಹೋದನಂತರ ಮಾಲಾಶ್ರೀ ಅವರ ಕುಟುಂಬಕ್ಕೆ ಯಾರೆಲ್ಲ ಬಂದು ಸಾಂತ್ವನ ಹೇಳಿದ್ದಾರೆ ಎಂಬುದನ್ನು ನಿಮಗೆ ಹೇಳುತ್ತೇವೆ.

ಹೌದು ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕರಾಗಿ ಮೆರೆದಿದ್ದ ನಿರ್ಮಾಪಕ ರಾಮು ರವರು ಈ ಮಹಾಮಾರಿ ಕಾಯಿಲೆಗೆ ಇಹಲೋಕ ವನ್ನು ತ್ಯಜಿಸಿ ಹೊರನಡೆದಿದ್ದಾರೆ. ರಾಮು ರವರು ಇಹಲೋಕ ತ್ಯಜಿಸಿದಾಗ ಅವರ ಕೊನೆಯ ವಿಧಿವಿಧಾನಗಳನ್ನು ಪೂರೈಸಲು ಅವರ ಕುಟುಂಬ ಸದಸ್ಯರು ಮಾತ್ರವಲ್ಲದೆ ಬೇರೆ ಯಾರು ಬರಲು ಸಾಧ್ಯವಾಗಿರಲಿಲ್ಲ. ನಟಿ ಮಾಲಾಶ್ರೀ ಅವರಿಗೆ ಚಿತ್ರರಂಗದ ಹಲವಾರು ಜನರು ಕರೆ ಮಾಡಿ ಸಾಂತ್ವನ ಹೇಳಿದರು ಭೇಟಿಯಾಗಲು ಯಾರು ಬರಲಾಗಲಿಲ್ಲ.

ಕಾರಣ ಕಠಿಣವಾಗಿ ನಿಗದಿಯಾಗಿದ್ದ ಲಾಕ್ಡೌನ್ ಕ್ರಮಗಳು. ಲಾಕ್ಡೌನ್ ನಿಂದಾಗಿ ಚಿತ್ರರಂಗದ ಯಾವ ಗಣ್ಯರು ಕೂಡ ಕೊನೆಯ ಕಾರ್ಯಕ್ರಮದಲ್ಲಿ ಅಥವಾ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ ಮಾಡಲಾಗಿರಲಿಲ್ಲ. ಆದರೆ ಈಗ ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು ಇಂದು ನಟಿ ಮಾಲಾಶ್ರೀ ಅವರ ಮನೆಗೆ ಬಂದಿರುವ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಲಾಶ್ರೀ ಅವರ ಮನೆಗೆ ಬಂದು ಏನು ಹೇಳಿದರು ಎಂದು ತಿಳಿಯೋಣ ಬನ್ನಿ.

ಹೌದು ರಾಮುಲು ಅವರನ್ನು ಕಳೆದುಕೊಂಡ ನಂತರ ಮಾಲಾಶ್ರೀಯವರ ಮನೆಗೆ ಮೊದಲನೇದಾಗಿ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿಯಾಗಿದ್ದಾರೆ. ಹೌದು ಮನೆಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿ ಮಹಾಲಕ್ಷ್ಮಿ ಹಾಗೂ ಅವರ ಮಕ್ಕಳಿಗೆ ಸಾಂತ್ವಾನ ಹೇಳಿ ಅವರಿಗೆ ಸಮಾಧಾನ ಮಾಡಿ ನಾವಿದ್ದೇವೆ ಎಂಬ ಧೈರ್ಯವನ್ನು ತುಂಬಿಸಿದ್ದಾರೆ. ಅಲ್ಲದೆ ಈಗಾಗಲೇ ದರ್ಶನ್ ರವರ ಕಲಾಸಿಪಾಳ್ಯ ಚಿತ್ರವನ್ನು ನಿರ್ಮಿಸಿದ್ದರಿಂದ ಅವರ ಕುಟುಂಬಕ್ಕೆ ಅಂದಿನಿಂದಲೂ ಒಂದು ಒಳ್ಳೆಯ ಬಾಂಧವ್ಯವಿದೆ.

ಅಲ್ಲದೆ ಚಿತ್ರರಂಗದಲ್ಲಿ ಯಾರು ಕೂಡ ನೊಂದಿದ್ದರು ಮೊದಲು ಬಂದು ಧೈರ್ಯ ತುಂಬುವುದು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಮಾತ್ರ. ಈಗ ಮಾಲಾಶ್ರೀ ಅವರ ವಿಚಾರದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೇ ನೀತಿಯನ್ನು ಅನುಸರಿಸಿದ್ದಾರೆ. ಇದಕ್ಕೆ ಅಲ್ಲವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಅಷ್ಟೊಂದಾಗಿ ಪ್ರೀತಿಸುವುದು. ಅವರಲ್ಲಿರುವ ಭಾವನಾತ್ಮಕ ಹಾಗೂ ಕರುಣೆ ಅವರನ್ನು ಎಲ್ಲರಿಂದ ಅತಿಯಾಗಿ ಪ್ರೀತಿಸಲು ಪಡುವುದು. ಚಾಲೆಂಜಿಂಗ್ ಸ್ಟಾರ್ ಅವರು ಮಾಲಾಶ್ರೀ ಅವರ ಮನೆಗೆ ಬಂದು ಸಾಂತ್ವಾನ ಹೇಳಿರುವುದರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Get real time updates directly on you device, subscribe now.