ನಿತ್ಯನಾನಂದ ಆಶ್ರಮ ಸೇರಿದ ಮತ್ತೊಬ್ಬರು ಕನ್ನಡ ಟಾಪ್ ನಟಿ ಯಾರು ಗೊತ್ತೇ?? ಕಾರಣವೂ ಕೂಡ ಇದೆಯಂತೆ.

34

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮಿ ಅವರ ಬಗ್ಗೆ ನಿಮಗೆ ಗೊತ್ತೇ ಇದೆ. ಮೊದಲೆಲ್ಲಾ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಪ್ರೋತ್ಸಾಹ ಇರುತ್ತಿತ್ತು. ಆದರೆ ಇವರ ಕೆಲವು ವಿಡಿಯೋಗಳು ಲೀಕ್ ಆದ ಮೇಲಂತೂ ಇವರ ಮೇಲೆ ಇದ್ದ ನಂಬಿಕೆ ಹಾಗೂ ಒಳ್ಳೆ ಅಭಿಪ್ರಾಯಗಳು ಜನರಿಂದ ಕಾಲಕ್ರಮೇಣವಾಗಿ ಮರೆಯಾಗುತ್ತಾ ಬಂತು. ಅದಕ್ಕಿದ್ದ ಕಾರಣ ನಿಮಗೆ ಗೊತ್ತಿದೆ ಏನು ಅಂತ.

ಹೌದು ನಿತ್ಯಾನಂದ ಸ್ವಾಮಿ ಇಬ್ಬರು ಹುಡುಗಿಯರ ಜೊತೆ ಒಂದು ರೂಮ್ನಲ್ಲಿ ಇದ್ದಿದ್ದು ಅವರ ಚಾಲಕ ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ್ದ. ಇಬ್ಬರು ಹುಡುಗಿಯರಲ್ಲಿ ಒಬ್ಬರು ದಕ್ಷಿಣ ಭಾರತದ ಖ್ಯಾತ ನಟಿ ರಂಜಿತಾ ರವರು ಎಂದು ಅದಾದನಂತರ ಎಲ್ಲಾ ಕಡೆ ಸುದ್ದಿಯಾಗಿತ್ತು. ನಟಿ ರಂಜಿತಾ ರವರು ಈ ಸುದ್ದಿಯ ನಂತರ ನಿತ್ಯಾನಂದ ಸ್ವಾಮಿ ಅವರ ಬಳಿಯೇ ದೀಕ್ಷಿ ಪಡೆದು ಸನ್ಯಾಸಿನಿಯಾಗಿ ಇದ್ದಾರೆ ಎಂಬುದು ಈಗ ಸಿಗುತ್ತಿರುವ ಮಾಹಿತಿ.

ಬಿಡದಿ ಆಶ್ರಮದಲ್ಲಿ ಸ್ವಾಮಿಯಾಗಿದ್ದ ನಿತ್ಯಾನಂದ ಸ್ವಾಮಿ ಈಗ ಅಮೆರಿಕ ದ್ವೀಪವೊಂದರಲ್ಲಿ ಖರೀದಿಸಿ ಕೈಲಾಸ ಎಂದು ಹೆಸರಿಟ್ಟು ರಾಜ್ಯಭಾರ ಮಾಡುತ್ತಿರುವುದು ಈಗ ಪ್ರಸ್ತುತ ಸುದ್ದಿ. ಕೈಲಾಸ ದೇಶಕ್ಕೆ ಎಲ್ಲರನ್ನೂ ಬನ್ನಿ ಬನ್ನಿ ಎಂದು ಸ್ವಾಗತಿಸಿದ ನಿತ್ಯಾನಂದ ಸ್ವಾಮಿ ತನ್ನ ದೇಶಕ್ಕೆ ತನ್ನದೇ ಆದಂತಹ ಕರೆನ್ಸಿಯನ್ನು ಕೂಡ ಪ್ರಾರಂಭ ಮಾಡುವ ಚಿಂತನೆಯಲ್ಲಿ ಇದ್ದರಂತೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಭಕ್ತಗಣವನ್ನೂ ಹೊಂದಿರುವ ನಿತ್ಯಾನಂದ ಸ್ವಾಮಿ ಅದರಲ್ಲೂ ಹೆಚ್ಚಿನ ಭಕ್ತರನ್ನು ಅಮೆರಿಕದಲ್ಲಿ ಹೊಂದಿರುವ ನಿತ್ಯಾನಂದ ಸ್ವಾಮೀಜಿಗೆ ಅಮೆರಿಕದ ಪಕ್ಕದಲ್ಲಿರುವ ಕೈಲಾಸ ದ್ವೀಪದಲ್ಲಿ ಧಾರ್ಮಿಕ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಆ ದ್ವೀಪವನ್ನು ಖರೀದಿಸಿ ತನ್ನ ಭಕ್ತರೊಂದಿಗೆ ಅಲ್ಲಿ ನೆಲೆಸಿದ್ದಾನೆ.

ಸದಾ ಒಂದಿಲ್ಲೊಂದು ವಿವಾ-ದಗಳಿಂದ ಸುದ್ದಿಯಾಗುವ ನಿತ್ಯಾನಂದ ಸ್ವಾಮಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈಗಲೂ ಏನು ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿಲ್ಲ ಅದು ಕೂಡ ನೀವಂದುಕೊಂಡಂತೆ ವಿ-ವಾದವೇ. ಹೌದು ನಿತ್ಯಾನಂದ ಸ್ವಾಮಿ ಅವರ ಜೊತೆಗೆ ನಟಿ ರಂಜಿತಾ ಅವರ ನಂತರ ಈಗ ಮತ್ತೊಬ್ಬ ನಟಿಯ ಹೆಸರು ತಳುಕು ಹಾಕಿಕೊಂಡಿದೆ. ಹೌದು ಆ ನಟಿ ಕೂಡ ಕನ್ನಡ ಮೂಲದವರೇ ಎಂಬುದು ಮತ್ತೊಂದು ವಿಶೇಷ. ಯಾರು ಆ ನಟಿ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ.

ಹೌದು ಈಗ ನಿತ್ಯಾನಂದ ಸ್ವಾಮಿ ಅವರ ಜೊತೆಗೆ ತಳುಕು ಹಾಕಿಕೊಂಡಿರುವ ಹೆಸರು ಕನ್ನಡ ಮೂಲದ ನಟಿ ಅವರದ್ದೇ. ಹೌದು ಈಗ ನಿತ್ಯಾನಂದ ರವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ನಟಿ ಎಂದರೆ ಅದು ಕೌಸಲ್ಯ. ಹೌದು ಕೌಶಲ್ಯ ರವರು ಬೆಂಗಳೂರಿನಲ್ಲಿ ಹುಟ್ಟಿ ಇಲ್ಲೇ ಮಾಡಲಿಂಗ್ ಅನ್ನು ಮಾಡಿ ನಂತರದ ದಿನಗಳಲ್ಲಿ ಮಲೆಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮಿಳು ಚಿತ್ರರಂಗದಲ್ಲಿ ಕೂಡ ಖ್ಯಾತಿಯನ್ನು ಪಡೆದ ನಟಿ ಕೌಸಲ್ಯ. ನಂತರ ಕನ್ನಡದಲ್ಲಿ ಕೂಡ ನಟಿಸಿದ್ದಾರೆ ನಟಿ ಕೌಸಲ್ಯ.

ಕನ್ನಡದಲ್ಲಿ ಕೂಡ ಬದ್ರಿ ಗೌತಮ್ ಎಂಬ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಕೌಸಲ್ಯ‌. ನಟಿ ಕೌಸಲ್ಯ ರವರಿಗೆ ಹಿಮ್ಮಡಿ ಬೇನೆ ಕಾಣಿಸಿಕೊಂಡಿತ್ತು ಎಲ್ಲಿ ಮದ್ದು ಮಾಡಿಸಿದರು ಅದು ಗುಣವಾಗಿರಲಿಲ್ಲ. ನಂತರ ಯಾರು ನಿತ್ಯಾನಂದ ಸ್ವಾಮಿ ಆಶ್ರಮದಲ್ಲಿ ಇದನ್ನು ವಾಸಿ ಮಾಡಲಾಗುತ್ತದೆ ಎಂದು ಹೇಳಿದಾಗ ಇಲ್ಲಿ ಬಂದು ಚಿಕಿತ್ಸೆಯನ್ನು ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ ನಟಿ ಕೌಸಲ್ಯ ರವರ ಹಿಮ್ಮಡಿ ಬೇನೆ ಸಂಪೂರ್ಣವಾಗಿ ಮಾಯವಾಯಿತು. ಇದಾದನಂತರ ನಟಿ ಕೌಸಲ್ಯ ನಿತ್ಯಾನಂದ ಸ್ವಾಮಿ ಅವರ ಬಳಿಯೇ ದೀಕ್ಷೆಪಡೆದು ಸನ್ಯಾಸಿಯಾದ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದು ಈಗಾಗಲೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹಳ ದೊಡ್ಡ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಇದರಿಂದ ಹಲವಾರು ಚರ್ಚೆಗಳು ಕೂಡ ಉದ್ಭವವಾಗಿದೆ. ನಿಮ್ಮ ಅನಿಸಿಕೆ ಈ ವಿಷಯದ ಬಗ್ಗೆ ಏನೆಂದು ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಪ್ಪದೆ ತಿಳಿಸಿ.

Get real time updates directly on you device, subscribe now.