ಕೊನೆಗೂ ಹಿರಿಯ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್, ರವರಿಗೆ ಕುಲಾಯಿಸಿದ ಅದೃಷ್ಟ. ಕೈ ಬಿಡಲಿಲ್ಲ ದೇವರು.

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಅತ್ಯದ್ಭುತವಾದ ನಟಿಯರಲ್ಲಿ ಲೀಲಾವತಿ ಕೂಡ ಒಬ್ಬರು. ಹೌದು ಕಪ್ಪು-ಬಿಳುಪು ಹಾಗೂ ಕಲರ್ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ ನಟಿ ಲೀಲಾವತಿ ಕನ್ನಡ ಚಿತ್ರರಂಗದ ಹಿರಿಯ ನಟಿ. ಹೌದು ನಾಯಕ ನಟಿಯಾಗಿ ಹಾಗೂ ನಂತರದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ ಲೀಲಾವತಿಯವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇನ್ನು ಅವರ ಮಗ ವಿನೋದ್ ರಾಜ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡವರು.

ಆದರೆ ಅವಕಾಶಗಳಿಲ್ಲದೆ ಅವರು ಚಿತ್ರರಂಗದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಹೌದು ಲೀಲಾವತಿಯವರ ಮಗ ವಿನೋದ್ ರಾಜ್ ಅವರು 1987 ರಲ್ಲಿ ಡಾನ್ಸ್ ರಾಜ ಡಾನ್ಸ್ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ನಂತರದ ದಿನಗಳಲ್ಲಿ ಅವರಿಗೆ ಯಾವ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಒದಗಲಿಲ್ಲ. ಹೀಗಾಗಿ ನಟನೆಯ ಪ್ರತಿಭೆ ಇದ್ದರೂ ಕೂಡ ಆ ಪ್ರತಿಭೆ ಸಿನಿಮಾರಂಗದಲ್ಲಿ ಮರೆಯಾಗಿ ಹೋಯಿತು.

ಆದರೆ ಅವರ ನೃತ್ಯ ಮಾತ್ರ ಇಂದಿಗೂ ಕನ್ನಡಿಗರಿಗೆ ನೆನಪಿದೆ. ಹೌದು ಅವರನ್ನು ಅಂದಿನ ಕಾಲದಲ್ಲಿ ಕರ್ನಾಟಕದ ಮೈಕಲ್ ಜಾಕ್ಸನ್ ಎಂದೇ ಕರೆಯಲಾಗುತ್ತಿತ್ತು. ಅಷ್ಟರಮಟ್ಟಿಗೆ ಅವರ ನೃತ್ಯ ಮನಮೋಹಕವಾಗಿತ್ತು. ಆದರೆ ಸಿನಿಮಾಗಳ ಅವಕಾಶವಿಲ್ಲದೆ ಅವರು ಚಿತ್ರರಂಗದಿಂದ ದೂರ ಉಳಿದರು. ಇದೀಗ ಕನ್ನಡ ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು ಜನರಿಗೆ ತುಂಬಾ ಇಷ್ಟವಾಗುತ್ತವೆ. ಇನ್ನು ಇಂತಹ ಕೆಲವು ರಿಯಾಲಿಟಿ ಶೋಗಳಲ್ಲಿ ಅದರ ಜ್ಞಾನವಿಲ್ಲದ ಅದೆಷ್ಟೋ ಜನ ಜಡ್ಜ್ ಆಗಿ ಕುಳಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

ಹೌದು ಇದೀಗ ಫೇಮಸ್ ಆದವರು ಬೇರೆ ಕ್ಷೇತ್ರದ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕುಳಿತಿದ್ದಾರೆ. ಇನ್ನು ಇದು ಕೆಲವು ಜನರಿಗೆ ಇಷ್ಟವಾಗದಿದ್ದರೂ ಕೂಡ ಏನು ಮಾಡಲು ಆಗುವುದಿಲ್ಲ ಎಂದು ಹಾಗೆಯೇ ನೋಡುತ್ತಿದ್ದಾರೆ. ಇಂತಹ ರಿಯಾಲಿಟಿ ಶೋಗಳಲ್ಲಿ ಡಾನ್ಸ್ ರಿಯಾಲಿಟಿ ಶೋಗಳು ಕೂಡ ಸಾಕಷ್ಟು ಪ್ರಸಾರವಾಗುತ್ತಿವೆ. ಇಂತಹ ರಿಯಾಲಿಟಿ ಶೋಗಳಲ್ಲಿ ನೃತ್ಯ ಮಾಡಲು ಬರದೇ ಇದ್ದರೂ ಕೂಡ ಅವರನ್ನು ತೀರ್ಪುಗಾರರ ಮೇಲೆ ಕೂರಿಸುತ್ತಾರೆ. ಇದು ಅನೇಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಹಲವಾರು ಪ್ರೇಕ್ಷಕರು ಇಂತಹ ಡಾನ್ಸ್ ರಿಯಾಲಿಟಿ ಶೋಗಳಿಗೆ ವಿನೋದ್ ರಾಜ್ ಅವರನ್ನು ತೀರ್ಪುಗಾರರಾಗಿ ಹಾಗೆ ಮಾಡಿ ಎಂದು ಒತ್ತಾಯಿಸುತ್ತಿದ್ದರು.

ಅಷ್ಟೇ ಅಲ್ಲದೆ ವಾಹಿನಿಯ ಮುಖ್ಯಸ್ಥರಿಗೆ ಕೂಡ ಅವರ ಧ್ವನಿಯನ್ನು ಮುಟ್ಟಿಸುತ್ತಿದ್ದರು. ಆದರೆ ವೀಕ್ಷಕರ ಧ್ವನಿಗೆ ಪ್ರತಿಕ್ರಿಯಿಸದ ವಾಹಿನಿ ಮುಖ್ಯಸ್ಥರು ಹಲವಾರು ತೀರ್ಪುಗಾರರು ಆಯ್ಕೆ ಮಾಡುತ್ತಿದ್ದರು. ಹಾಗಾಗಿ ವಿನೋದ್ ರಾಜ್ ಅವರಿಗೆ ಯಾವುದೇ ಅವಕಾಶಗಳನ್ನು ನೀಡಿರಲಿಲ್ಲ. ಆದರೆ ಇದೀಗ ವಿನೋದ ರಾಜ್ ಅವರಿಗೆ ಒಂದು ದೊಡ್ಡ ಅವಕಾಶ ಒದಗಿಬಂದಿದೆ. ಹೌದು ಇದೀಗ ಮುಖವಾಡ ಚಿತ್ರತಂಡ ವಿನೋದ್ ರಾಜ್ ಅವರಿಗೆ ನಟಿಸಲು ಅವಕಾಶ ನೀಡಲು ಮುಂದೆ ಬಂದಿದೆ.

ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಈ ಬಗ್ಗೆ ವಿನೋದ್ ರಾಜ್ ಅವರು ಯಾವುದೇ ಅಧಿಕೃತವಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ ಕೂಡ ಅಭಿಮಾನಿಗಳು ವಿನೋದ್ ರಾಜ್ ಅವರಿಗೆ ಈ ಅವಕಾಶ ಬಂದಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮುಖವಾಡ ಚಿತ್ರತಂಡಕ್ಕೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ವಿನೋದ್ ರಾಜ್ ಅವರು ಅಭಿನಯಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.