ದರ್ಶನ ರವರ ಅಭಿನಯ ನೋಡಿ ನಟ ಸೌರ್ವಭೌಮ ಡಾ ರಾಜ್ ಕುಮಾರ್ ರವರು ಅಂದು ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಾಕ್ಸ್ ಆಫೀಸ್ ಸುಲ್ತಾನ , ಡಿ-ಬಾಸ್ ಒಂದೇ ಎರಡೇ..ಹೀಗೆ ಸಾಲು ಸಾಲು ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ದರ್ಶನ್ ಕೇವಲ ಮಾಸ್ ಹೀರೋ ಮಾತ್ರ ಅಲ್ಲ. ಕ್ಲಾಸ್ ಹೀರೋ ಕೂಡ. ತನ್ನ ಉದ್ದವಾದ ಕಾಲುಗಳಿಂದ ವಿಲನುಗಳನ್ನು ಆಕಾಶಕ್ಕೆ ಏರಿಸುವ ದರ್ಶನ್ ತನ್ನ ಮನೋಜ್ಞ ಅಭಿನಯದಿಂದ ಹಲವರ ಕಣ್ಣಲ್ಲೂ ನೀರು ತರಿಸಿದ್ದಾರೆ.
ಮೆಜೆಸ್ಟಿಕ್ ನಿಂದ ಶುರುವಾದ ದರ್ಶನ್ ಖದರ್, ಅವರನ್ನ ಕೇವಲ ಮಾಸ್ ಹೀರೋ ಎಂದು ಗುರುತಿಸುತ್ತಿತ್ತು. ಆದರೇ ಆ ಇಮೇಜ್ ನಿಂದ ಹೊರಬಂದ ದರ್ಶನ್ ಲಾಲಿಹಾಡು ಎಂಬ ಸೆಂಟಿಮೆಂಟ್ ಹಾಗೂ ಮ್ಯೂಸಿಕಲ್ ಸಿನಿಮಾದಲ್ಲಿ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದರು. ಇಷ್ಟೇ ಅಲ್ಲದೇ ಅಭಿನಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ ನಮ್ಮ ಪ್ರೀತಿಯ ರಾಮು ಎಂಬ ಸಿನಿಮಾದಲ್ಲಿ ಅಭಿನಯಿಸಿದರು. ಅಂಧ ಹಾಡುಗಾರನಾಗಿ ಸಿನಿಮಾ ಪೂರ್ತಿ ದರ್ಶನ್ ಆವರಿಸಿಕೊಂಡಿದ್ದರು.
ಆ ಸಿನಿಮಾವನ್ನ ನಟ ಡಾಕ್ಟರ್ ರಾಜ್ ಕುಮಾರ್ ಸಹ ನೋಡಿದ್ದರಂತೆ. ಆ ಸಿನಿಮಾ ಕ್ಲೈಮಾಕ್ಸ್ ನಲ್ಲಿ ರಾಜ್ ರವರ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದವಂತೆ. ತಕ್ಷಣವೇ ದರ್ಶನ್ ರವರಿಗೆ ಫೋನಾಯಿಸಿ ತಮ್ಮ ಸದಾಶಿವ ನಗರದ ಮನೆಗೆ ಕರೆಸಿಕೊಂಡು ತುಂಬು ಹೃದಯದಿಂದ ಅಭಿನಂದಿಸಿದರಂತೆ. ದರ್ಶನ್ ರವರ ತಂದೆ ತೂಗುದೀಪ ಶ್ರೀನಿವಾಸ್ ಜೊತೆಗೆ ಕಳೆದ ಕ್ಷಣಗಳನ್ನು ಡಾ ರಾಜ್ ದರ್ಶನ್ ರ ಜೊತೆ ಮೆಲುಕು ಹಾಕಿದರಂತೆ. ಅಣ್ಣಾವ್ರ ಈ ಗುಣವನ್ನ ದರ್ಶನ್ ತಾವು ಸಹ ಅಳವಡಿಸಿಕೊಂಡಿದ್ದು, ಯಾವುದೇ ಕಲಾವಿದ ಉತ್ತಮವಾಗಿ ಅಭಿನಯಿಸಿದ್ದು ಕಂಡರೇ, ನಾನು ಸಹ ಅವರನ್ನು ಕರೆದು ಅವರಿಗೆ ಉತ್ತಮ ಸಲಹೆಗಳನ್ನು ನೀಡುತ್ತಿರುತ್ತೆನೆ ಎಂದು ತಿಳಿಸಿದರು.