ಜೊತೆ ಜೊತೆಯಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ! ಕಥೆಯಲ್ಲಿ ಮಹತ್ವದ ತಿರುವು ನೀಡಲು ಸಿದ್ಧವಾದ ಸೂರ್ಯ ಏನು ಗೊತ್ತಾ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಹಲವಾರು ಧಾರವಾಹಿಗಳು ಯಶಸ್ಸಿನ ಸಾಲಿಗೆ ಸೇರಿಕೊಂಡರು ಕೂಡ ಜೊತೆ ಜೊತೆಯಲ್ಲಿ ದಾರವಾಹಿ ನಿಜಕ್ಕೂ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತದೆ. ಯಾಕೆಂದರೆ ಜನರು ಜೊತೆ ಜೊತೆಯಲಿ ಧಾರಾವಾಹಿಯನ್ನು ಇತರ ಧಾರಾವಾಹಿ ಗಳಂತೆ ಚೆನ್ನಾಗಿದೆ ಎಂದು ನೋಡುತ್ತಿಲ್ಲ ಬದಲಾಗಿ ಜೊತೆ ಜೊತೆಯಲಿ ಧಾರಾವಾಹಿ ಜೊತೆ ಭಾವನಾತ್ಮಕ ಸಂಬಂಧ ಬೆಳಸಿಕೊಂಡು ಧಾರವಾಹಿಯನ್ನು ಇಷ್ಟಪಡುತ್ತಿದ್ದಾರೆ. ಇದರಲ್ಲಿ ನಟನೆ ಮಾಡಿದ ಕಲಾವಿದರಿಗೂ ಕೂಡ ಜನರು ಭಾವನಾತ್ಮಕವಾಗಿ ಬೆಂಬಲ ನೀಡುತ್ತಿದ್ದಾರೆ.

ಅದೇ ಕಾರಣಕ್ಕಾಗಿ ಇರಬೇಕು ಅಗ್ನಿಸಾಕ್ಷಿ ಧಾರವಾಹಿ ಯ ಖ್ಯಾತಿಯ ನಟ ವಿಜಯ್ ಸೂರ್ಯ ರವರು ಆರ್ಯವರ್ಧನ್ ಹಾಗೂ ಅನು ಸಿರಿಮನೆ ರವರ ಪ್ರೀತಿಯ ನಡುವೆ ಬಂದಾಗ ಜನರು ಅದನ್ನು ಇಷ್ಟಪಡಲಿಲ್ಲ. ಇದು ಧಾರವಾಹಿಯಲ್ಲಿ ತಿರುವು ಪಡೆದುಕೊಳ್ಳುವ ಸಮಯ ಎಂದು ತಿಳಿದಿದ್ದರೂ ಕೂಡ ಜನರು ಭಾವನಾತ್ಮಕವಾಗಿ ಉತ್ತರ ನೀಡಿ ಈ ಕತೆ ನಮಗೆ ಇಷ್ಟವಾಗುತ್ತಿಲ್ಲ ದಯವಿಟ್ಟು ವಿಜಯ ಸೂರ್ಯ ರವರ ಪಾತ್ರವನ್ನು ಅಂತ್ಯಗೊಳಿಸಿ ಎಂದು ಎಲ್ಲೆಡೆ ಮನವಿ ಮಾಡಿದ್ದರು. ಆದರೆ ಅದೇ ವಿಜಯ್ ಸೂರ್ಯ ರವರು ಇದೀಗ ಜೊತೆ ಜೊತೆಯಲ್ಲಿ ದಾರವಾಹಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಲು ತಯಾರಿ ನಡೆಸುತ್ತಿದ್ದಾರೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅನು ಸಿರಿಮನೆ ಹಾಗೂ ಆರ್ಯವರ್ಧನ್ ರವರ ಮದುವೆಗೆ ಅಡ್ಡಗಾಲು ಹಾಕಿರುವುದು ಅನು ಸಿರಿಮನೆ ರವರ ತಂದೆ ಸುಬ್ಬು ಸಿರಿಮನೆ. ಸುಬ್ಬು ಸಿರಿಮನೆ ರವರು ವಿಜಯ ಸೂರ್ಯ ರವರ ಜೊತೆ ಅನು ಸಿರಿಮನೆ ರವರ ಮದುವೆ ಮಾಡಬೇಕು ಎಂದು ಆಸೆ ಪಡುತ್ತಿದ್ದಾರೆ, ಆದರೆ ಇದೇ ಸಮಯದಲ್ಲಿ ಆರ್ಯವರ್ಧನ್ ಹಾಗೂ ಅನುಸಿರಿಮನೆ ಇರಬಾರದು ನಡುವಿನ ಪ್ರೀತಿಯ ಬಗ್ಗೆ ವಿಜಯ್ ಸೂರ್ಯ ರವರಿಗೆ ತಿಳಿಯುತ್ತದೆ. ಇವರಿಬ್ಬರ ಪ್ರೀತಿ ತಿಳಿದ ಕೂಡಲೇ ವಿಜಯ್ ಸೂರ್ಯ ರವರು ಅನುರವರ ಪರಿಸ್ಥಿತಿ ಹಾಗೂ ಸುಬ್ಬು ರವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಿ ತಾವೇ ನಿಂತು ಸುಬ್ಬು ಸಿರಿಮನೆ ರವರ ಮನವೊಲಿಸಿ ಆರ್ಯವರ್ಧನ್ ಹಾಗೂ ಅನು ಜೋಡಿ ಯನ್ನು ಒಂದು ಮಾಡುತ್ತಾರೆ ಎಂಬುದು ತಿಳಿದು ಬಂದಿದೆ. ಈ ಮೊದಲು ಪ್ರೀತಿ ವಿಷಯದ ತಿಳಿದ ಕೂಡಲೇ ಆಸ್ಟ್ರೇಲಿಯಾ ಹೋಗುತ್ತಾರೆ ಎಂಬ ಮಾಹಿತಿ ಕೇಳಿಬಂದಿತ್ತು, ಇದರಿಂದ ಮತ್ತೊಮ್ಮೆ ಸುಬ್ಬು ರವರು ಬೇರೆ ಹುಡುಗನನ್ನು ಹುಡುಕುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಪ್ರೀತಿ ಕುರಿತು ತಿಳಿದ ಕೂಡಲೇ ಇವರು ಆಸ್ಟ್ರೇಲಿಯಾಗೆ ಹೋಗುವುದಿಲ್ಲ ಬದಲಾಗಿ ತಾವೇ ಮುಂದೆ ನಿಂತು ಎಲ್ಲರನ್ನು ಒಪ್ಪಿಸಿ ಮದುವೆ ಮಾಡಿಸುತ್ತಾರೆ ಎಂಬುದು ತಿಳಿದುಬಂದಿದೆ.

Get real time updates directly on you device, subscribe now.