ಎಲ್ಲಾ ಅಂದುಕೊಂಡಂತೆ ಆಗಿದ್ದರೇ ದುನಿಯಾ ಸಿನಿಮಾದ ಈ ಪಾತ್ರದಲ್ಲಿ ಯಶ್ ನಟಿಸಬೇಕಾಗಿತ್ತು.

11

Get real time updates directly on you device, subscribe now.

ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಯಶ್ ರವರು ಜೀವನದಲ್ಲಿ ಹಂತಹಂತವಾಗಿ ಮೇಲೆ ಬಂದಿದ್ದಾರೆ. ಯಾರದೋ ಬ್ಯಾಗ್ರೌಂಡ್ ಇಂದ ಅಥವಾ ಸಹಾಯದಿಂದ ಇವರು ಒಮ್ಮಲೇ ರಾತ್ರೋರಾತ್ರಿ ಸ್ಟಾರ್ ಆಗಿಲ್ಲ, ಜೀವನದ ಪ್ರತಿಯೊಂದು ರೀತಿಯಲ್ಲಿಯೂ ಕೂಡ ಎಲ್ಲಾ ಸವಾಲುಗಳನ್ನು ಎದುರಿಸಿ ಏನು ಇಲ್ಲದ ಹಾಗೆ ಬಂದು ಇದೀಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಇವರ ಛಲ ಹಾಗೂ ಅದ್ಭುತ ನಟನೆ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು.

ಹೀಗೆ ಅಂತರ್ರಾಷ್ಟ್ರೀಯ ಮಟ್ಟದವರೆಗೂ ತಲುಪಿರುವ ಯಶ್ ರವರು ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಕಾದು ಕುಳಿತಿರುತ್ತಿದ್ದರು. ಧಾರಾವಾಹಿಗಳ ಮೂಲಕ ತಮ್ಮ ನಟನೆ ಜೀವನವನ್ನು ಆರಂಭಿಸಿದ ಯಶ್ ರವರು ಒಂದಲ್ಲ ಒಂದು ದಿವಸ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಸಿಗುತ್ತದೆ ಎಂಬ ಭರವಸೆಯನ್ನು ಎಂದಿಗೂ ಬಿಟ್ಟುಕೊಟ್ಟಿರಲಿಲ್ಲ. ಇಂದು ನಾವು ಯಶ್ ರವರ ಜೀವನದ ಒಂದು ಅಪರೂಪದ ಘಟನೆಯ ಬಗ್ಗೆ ನಿಮಗೆ ತಿಳಿಸುತ್ತೇವೆ. ಅದು 2006 ಹಾಗೂ 2007ರಲ್ಲಿ ನಡೆದ ಘಟನೆ, ಕನ್ನಡದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದಾದ ದುನಿಯಾ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಯುವಕರಿಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಚಿತ್ರದಲ್ಲಿ ಅವಕಾಶ ನೀಡಿದರು.

ಈ ಸಿನಿಮಾದ ಚಿತ್ರೀಕರಣ ನಡೆಯುವಾಗ ಯಶ್ ರವರು ಒಂದು ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಂದಾದ ನಟ ಕಿಶೋರ್ ರವರು ನಿರ್ವಹಿಸಿರುವ ಪೊಲೀಸ್ ಆಫೀಸರ್ ಪಾತ್ರದ ಅಸಿಸ್ಟೆಂಟ್ ಆಗಿ ನಟನೆ ಮಾಡಲು ಯಶ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿತ್ತು. ನಂದಗೋಕುಲ ಧಾರವಾಹಿಯಲ್ಲಿ ಯಶ್ ಅವರು ನಟನೆ ಮಾಡುತ್ತಿದ್ದಾಗ ನಂದಗೋಕುಲ ಧಾರವಾಹಿಯ ಛಾಯಾಗ್ರಾಹಕ ಸತ್ಯ ಹೆಗಡೆ ರವರು ಯಶ್ ರವರಿಗೆ ಅಸಿಸ್ಟೆಂಟ್ ಪಾತ್ರವನ್ನು ಕೊಡಿಸುತ್ತೇನೆ ಎಂದು ನಿರ್ದೇಶಕರನ್ನು ಭೇಟಿ ಮಾಡಿಸಿದ್ದರು.

ಆದರೆ ಕಾರಣಾಂತರಗಳಿಂದ ನಿರ್ದೇಶಕರು ಕಥೆಯಲ್ಲಿ ಬದಲಾವಣೆ ಮಾಡಿ ಕಿಶೋರ್ ರವರಿಗೆ ಯಾರು ಅಸಿಸ್ಟೆಂಟ್ ಬೇಡ ಎಂದು ಹೇಳುತ್ತಾರೆ. ಆಗ ಯಶ್ ರವರು ನಟಿಸುವ ಅವಕಾಶ ಕೈ ತಪ್ಪಿ ಹೋಗುತ್ತದೆ. ಹೀಗೆ ಒಂದು ಕಾಲದಲ್ಲಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಯಶ್ ರವರು ಇಂದು ನ್ಯಾಷನಲ್ ಸ್ಟಾರ್ ಆಗಿದ್ದಾರೆ ಎಂದರೆ ಅದು ಪರಿಶ್ರಮದಿಂದ ಮಾತ್ರ. ನೀವು ಕೂಡ ಅಷ್ಟೇ ನಿಮ್ಮ ಜೀವನದಲ್ಲಿ ಪರಿಶ್ರಮ ಪಟ್ಟರೆ ಖಂಡಿತ ಅದು ವ್ಯರ್ಥವಾಗುವುದಿಲ್ಲ ಒಂದು ಗೆಲುವು ಕಾಣುತ್ತೀರಾ ಇಲ್ಲ ಸೋಲಿನ ಪಾಠ ಕಲಿಯುತ್ತೀರಿ.

Get real time updates directly on you device, subscribe now.